Wednesday, December 23, 2020

ಕಾಲೇಜು ಗಿಣಿಗಳು ಮತ್ತು ಮೆಸೇಜ್ 

ಇದೆ ಮೊದಲ ಒಲ ಓಲೆ ಇದು, 
ಹೆದೆಯ ತೊದಲ ಕರೆಯೋಲೇ ಇದು 
ಕೈ ಇಡಿದು ಕಾಪಾಡು ; ಈ ಪ್ರೀತಿಯನ್ನ ಎಂದು ಹಾಡು ರೇಡಿಯೋ ಬಿಗ್ ಎಫ್ ಎಮ್ ನಲ್ಲಿ ಬರುತ್ತಿದ್ದರೆ ಅದರ ಕೇಳುತ್ತಿದ್ದ ರಂಗನ ಪಾಡು ಹೇಳದಾಗಿತ್ತು. 

ವೊಡಾಫೋನ್ ಸಿಮ್ ನಲ್ಲಿದ್ದ ಅಂದಿನ ಮೆಸೇಜ್ ಪ್ಯಾಕ್ ಖಾಲಿಯಾಗಿತ್ತು. ಇಷ್ಟು ಬೇಗ 150 ಟೆಕ್ಸ್ಟ್ ಮೆಸೇಜ್ಗಳು ಮುಗಿದು ಹೋದವೇ ? ಎಂದು ಕೊಂಡವನು , ಗೆಳೆಯ ಶಿಸ್ತಿನ ಸಿಪಾಯಿ ವಿನೋದನ ಬಳಿ ಮೊಬೈಲ್ ಹೇಗೆ ಕೇಳುವುದು ಎಂದು ತಂತ್ರ ಹೆಣೆಯ ತೊಡಗಿದ. 

ಅದು ಮಂಡ್ಯ ಜಿಲ್ಲೆಯ ಪ್ರಸಿದ್ಧ ಮಠದ  ಇಂಜಿನಿಯರಿಂಗ್ ಕಾಲೇಜು. ಅದರ ಟೀಚಿಂಗ್ ಬ್ಲಾಕ್ ನ  ಕ್ಯಾಂಪಸ್ ನಲ್ಲೆ ಇರುವುದು ಹುಡುಗರ ಹಾಸ್ಟೆಲ್.  ಅದರ ಪಕ್ಕದಲ್ಲಿ ಹುಡುಗರ ಮೆಸ್ , ಇದರ ಪಕ್ಕದಲ್ಲಿ ಲೈಬ್ರರಿ.  ಲೈಬ್ರರಿಗೆ ಯಾರೇ ಹೋಗಬೇಕೆಂದರೂ ಹುಡುಗರ ಹಾಸ್ಟೆಲ್ನ ಮುಂದೇನೆ ಹೋಗಬೇಕು. ಅಲ್ಲಿಗೆ ಹೋಗುವವರನ್ನು ನೋಡುವುದಕ್ಕೆಂದೇ ಹುಡುಗರ ಗುಂಪು ಹಾಸ್ಟೆಲ್ನ ಗೇಟ್ ಬಳಿಯೇ ಇರುತ್ತಿದ್ದರು. ಅಲ್ಲಿಗೆ ಹೋಗುವ - ಬರುವ ಹುಡುಗಿಯರನ್ನು ನೋಡಲು ಹುಡುಗರು ಪಾಪ ಹಾಸ್ಟೆಲ್ ಗೇಟಿನ ಬಳಿ ಕಾದಿದ್ದೋ ಕಾದಿದ್ದು; ಬಂದ ನಂತರ ಕೀಚಾಯಿಸಿ ಉಗಿಸಿಕೊಳ್ಳುದು ಕಾಮನ್ !

ಇಂಜಿನಿಯರಿಂಗ್ ಓದುವವರಿಗೆ ಗಣಿತ ಮೊದಲು ಎರಡು ವರ್ಷ ಕಡ್ಡಾಯ ವಿಷಯ.  ಲೆಕ್ಕದಲ್ಲಿ ತಿಳುವಳಿಕೆ ಕಡಿಮೆ ಇರುವ ನನಂತವರಿಗೆ ಅದು ಯಾವಾಗ್ಲೂ ಕಬ್ಬಿಣ. ನಮಗೆ ಗಣಿತ ಬೋದಿಸುತ್ತಿದ ಹೊಸ ಲೆಕ್ಚರರ್ ಒಬ್ಬರು ಲೈಬ್ರರಿಗೆ ಹೋಗಲು ಹೋಗುತ್ತಿದಾಗ. ಯಾರೋ ಹುಡುಗರು ' ತಿಕಲ ತಿಕಲ ' ಅಂತ ಕೂಗಿದ್ದಾರೆ.  
ನಂತರ ಆ ಲೆಕ್ಚರರ್ ಪ್ರಿನ್ಸಿಪಾಲ್ ಗೆ ಕಂಪ್ಲೇಂಟ್ ಮಾಡಿ, ಏನೂ ಮಾಡಿದರು ಯಾರು ಕೂಗಿದ್ದು ಅಂತ ತಿಳಿಯಲಿಲ್ಲ. ತಿಲಕ್ ಸರ್ ನನಗೆ ತಿಕಲ ಕೂಗಿದವನ ಅಪ್ಪ ತಿಕಲ ಅಂತ ಹೇಳಿ ಸಮಾಧಾನ ಮಾಡಿಕೊಂಡರು ಅಷ್ಟೇ . 

ಪರೀಕ್ಷೆ ಸಮಯದಲ್ಲಿ ಕೆಲವು ಹುಡುಗಿಯರು ಎಲ್ ಎಚ್ ನಿಂದ ಲೈಬ್ರರಿ ಗೆ ಓದಲು ಬರುತಿದ್ದರು, ಆಗ ಅವರ ಅಕ್ಕ-ಪಕ್ಕ ದಲ್ಲಿ ಕುಳಿತುಕೊಳ್ಳಲು ಪೈಪೋಟಿ ನಡೆಯುತಿತ್ತು.  ಕಂಪ್ಯೂಟರ್ ಸೈನ್ಸ್ ವಿಭಾಗದ ಕೆಬಿಸಿ ಕೂಡ ಲೈಬ್ರರಿಗೆ ಓದಲು ಬರುತ್ತಿದ್ದಳು. ಅವಳೊಡನೆ ಮಾತನಾಡಲು ಯಾರಿಗೂ ಮೀಟರ್ ಇಲ್ಲದ್ದರಿಂದ ಯಾರೂ ಅವಳ ಪಕ್ಕ ಕೂರುವ ಧೈರ್ಯ ಮಾಡುತ್ತಿರಲಿಲ್ಲ. ಯಾವತ್ತೂ ಬೇಗ ಎದ್ದು ಸ್ನಾನ ಮಾಡದ ಮಂಡ್ಯ ಪರೀಕ್ಷೆವೇಳೆಯಲ್ಲಿ ಬೇಗ ಮುಖ ತೊಳೆದು, ಪೌಡರ್ ಮತ್ತು ಡೀಯೋ  ಹಾಕಿಕೊಂಡು ಅವಳ ಪಕ್ಕದ ಬೆಂಚಿನಲ್ಲಿ ಕುಳಿತು ಮಿಕ ಮಿಕ ನೋಡುತ್ತಿದ್ದನು.  ಎಲ್ಲರಿಗು ಕ್ವಾಟ್ಲೆ ಮಾಡುತ್ತಾ ಈ ಮಂಡ್ಯ ಬರದಿದ್ದರೆ ಸಾಕು ಎನಿಸುವಷ್ಟು ಕೀಟಲೆ ಮಾಡುತ್ತಿದನು. ಆಮೇಲೆ ಬಂದು ನನ್ಮಕ್ಳ ನಿಮಗೆ ಯಾರಿಗೂ ಮೀಟರ್ ಇಲ್ಲ ಎಂದು ಒಂದು ತಿಂಗಳು ಕೊರೆಯುತ್ತಿದ್ದ.  ಅವನು ಏನೇ ಕೊರೆದರೂ 
ಅವನು ಊರಿಂದ ಬಂದಾಗ ಎಲ್ಲರಿಗು ಕಡ್ಲೆ ಮಿಠಾಯಿ ಕೊಡುತಿದ್ದ. ನಾನು ಹಾಸ್ಟೆಲ್ ನಲ್ಲಿ ಇರದಿದ್ದರೂ ಕಾಲೇಜಿಗೆ ಬಂದಾಗ ನನಗೆ ಕಾಪಾಡಿ ಇಟ್ಟು ತಿನ್ನಲು ಕೊಡುತಿದ್ದ. 

ವಿನೋದ ಕಾಲೇಜು ಮುಗಿದ ನಂತರ ಸಂಜೆ ಪ್ರತಿ ರೂಮ್ಗು ಹೋಗಿ ಭೇಟಿ ಕೊಟ್ಟು ಎಲ್ಲರನ್ನು ಮಾತನಾಡಿಸಿ ಬರುತ್ತಿದ್ದ. ಅದಕ್ಕೆ ಅವನಿಗೆ ಹುಡುಗರು ವಾರ್ಡನ್ ಎಂದು ಹೆಸರಿಟ್ಟದರು. ಹುಡುಗಿಯರ ಹಾಸ್ಟೆಲ್ನಲ್ಲಿ ಕೂಡ ನಮ್ಮ ಕ್ಲಾಸಿನ ಒಬ್ಬ ಹುಡುಗಿ ವಾರ್ಡನ್ ಇದ್ದಳಂತೆ  

ವಾರ್ಡನ್ ಎಷ್ಟು ಶಿಸ್ತಿನ ಸಿಪಾಯಿಯೆಂದರೆ, ಅವನು ಹಾಕುತ್ತಿದ್ದ ಶರ್ಟ್ ಮತ್ತು ಪ್ಯಾಂಟ್ ಐರನ್ ಆಗಿರಲೇ ಬೇಕಿತ್ತು. ಅವನು ಹಾಸಿಗೆಯ ಮೇಲೆ ಯಾರೇ ಕೂತರು ಅವನಿಗೆ ಇಷ್ಟ ಆಗುತ್ತಿರಲಿಲ್ಲ ಒಂದು ಬಫ್ ಪೇಪರ್ನಲ್ಲಿ ಒಂದು ವಾರ ಫಾರ್ಮುಲಾ ಅಥವಾ ಲೆಕ್ಕ ಪ್ರಾಕ್ಟಿಸ್ ಮಾಡುತಿದ್ದ. ಇಂತವನ ಬಳಿ ಮೊಬೈಲ್ ಹೇಗೆ ಕೇಳುವುದು ಎಂದು ರಂಗ  ತುಂಬಾ ಯೋಚ್ನೆ ಮಾಡಿ ಕೊನೆಗೆ ಧೈರ್ಯ ಮಾಡಿ ಕೇಳೇಬಿಟ್ಟ 

ರಂಗ  : ವಿನೋದ, ಹೇಗಿದ್ರು ಈಗ ರಾತ್ರಿ 11 ಗಂಟೆ ನೀನು ಮಲಗಿದ ನಂತರ ನಿನ್ನ ಮೊಬೈಲ್ ಸ್ವಲ್ಪ ಕೊಡ್ತೀಯಾ ? ಹೇಗಿದ್ರು 12 ಗಂಟೆಗೆ ನನ್ನ ಮೆಸೇಜ್ ಪ್ಯಾಕ್ ರಿನ್ಯೂ  ಆಗುತ್ತೆ. ಸ್ವಲ್ಪ ಗರ್ಲ್ ಫ್ರೆಂಡ್ ಗೆ ಮೆಸೇಜ್ ಮಾಡಬೇಕಾಗಿತ್ತು ಅಂದ. 

ವಿನೋದ : ಯಾಕೆ ನಿನ್ನ ಮೊಬೈಲ್ ಏನಾಯಿತು 

ರಂಗ  :  ಎಲ್ಲ ಮೆಸೇಜ್ ಮುಗಿದು ಹೋಗಿದೆ, ಹಿಡಿದ್ರು ನಿನ್ನ ಮೊಬೈಲ್ ನಲ್ಲಿ ಇನ್ನು 150 ಮೆಸೇಜ್ ಬಾಕಿ ಇದೆ. ಸ್ವಲ್ಪ ಬೇಗ ಕೊಡು 

ವಿನೋದ: ಅಲ್ಲ ಗುರು , ಮೆಸೇಜ್ ಇಲ್ಲ ಅಂದ್ರೆ ಸುಮ್ಮನಿರು ಬೇರೆಯವರ ಮೊಬೈಲ್ ಮೂಲಕ ಮೆಸೇಜ್ ಮಾಡೋ ಅರ್ಜೆಂಟ್ ಏನು?

ರಂಗ  : ನಿನಗೆ ಅದು ಅರ್ಥ ಆಗಲ್ಲ, ನಾನು ಅವಳಿಗೆ ಲಾಸ್ಟ ಮೆಸೇಜ್ ಮಾಡಿ ಒಂದು ಗಂಟೆ ಆಯಿತು. ನಾನು ಈಗ ಮೆಸೇಜ್ ಮಾಡಲಿಲ್ಲ ಅಂದ್ರೆ ಅವಳು ಬ್ರೇಕ್-ಅಪ್ ಮಾಡ್ಕೋ ಬಹುದು 

ವಿನೋದ: ಇದಕ್ಕೆ ನಿಮಗೆ ಗರ್ಲ್ ಫ್ರೆಂಡ್ ಬೇಕ ? ಹುಡುಗರ ಹಾಸ್ಟೆಲ್ನಲ್ಲಿ ಏನಾಯಿತು, ಯಾರು ಸ್ನಾನ ಮಾಡಿದ, ಎಷ್ಟು ಗಂಟೆಗೆ ಉಚ್ಚೆ ಮಾಡಿದೆ ಎಂದು ಹೇಳೋದಿಕ್ಕ ಮೆಸೇಜ್ ಸರ್ವಿಸ್ ಇರೋದು . 

ರಂಗ  : ಆಯಿತು ಬಿಡು, ನಿನಗೆ ಇನ್ನೊಂದು ಸರಿ ಕೇಳೋದಿಲ್ಲ. 

ವಿನೋದ: ಫೋನ್ ಮಾಡಿ ಹೇಳು, ಮೆಸೇಜ್ ಪ್ಯಾಕ್ ಮುಗಿದು ಹೋಗಿದೆ ನಾಳೆ ಮೆಸೇಜ್ ಮಾಡ್ತೀನಿ ಅಂತ . 

ಮಾರನೇ ದಿನ ಮಧ್ಯಾಹ್ನ ಊಟ ವೇಳೆಯಲ್ಲಿ ಒಂದು ಹಾವಿನ ಮರಿ ಬಂದಿತ್ತಂತೆ, ಎಲ್ಲರು ಅದನ್ನು ಓಡಿಸಿದರೆ ರಂಗ ಅದನ್ನು ಹಿಡಿಯಲು ಪ್ರಯತ್ನ ಪಟ್ಟು ನಿಜವಾದ ವಾರ್ಡನ್ ನಿಂದ ಬೈಸಿ ಕೊಡಿದ್ದ. ಈ ವಿಷಯವನ್ನು ವಿನೋದ ಪ್ರತಿಯೊಂದು ರೂಮಿಗೆ ಹೇಳಿ , ಎಲ್ಲಾರಿಗೂ ಹಾವಾಡಿಗ ಅಂದರೆ ರಂಗ ಅಂತ ಪ್ರಚಾರ ಮಾಡಿದ್ದ 

ಮಾರನೇ ದಿನ ರಂಗ ಬೆಳಗಿನ ಕ್ಲಾಸ್ ಗೆ ತಡವಾಗಿ ಹೋದಾಗ ಹುಡುಗಿಯರ ಸಾಲಿ ನಿಂದ ಮತ್ತು ಹುಡುಗರ ಕಡೇಯಿಂದ ಬುಸ್ಸು ಬುಸ್ಸು ಎಂದು ಶಬ್ದ ಬರುತ್ತಿತ್ತು.  ರಂಗ ಸಿಟ್ಟಾಗಿ ಕಪ್ಪೆ ಹುಡುಗಿಗೆ ಬೈದಿದ್ದು ಆಯಿತು. 

ಇಷ್ಟೆಲ್ಲ ನಡೆದರೂ  ಏನು ಓದದೇ ಇದ್ದರು ವಾರ್ಡನ್ ಮೊದಲನೇ ದರ್ಜೆಯಲ್ಲಿ ಪಾಸಾಗುತಿದ್ದನು. 
ಸರಿ  ತಿಂಗಳು ರಜೆ ಮುಗಿದು ಮತ್ತೆ ಕಾಲೇಜು ಶುರುವಾಯಿತು. 
ನಮ್ಮ ವಾರ್ಡನ್ ಮೊದಲನೇ ದಿನವೇ ಕಾಲೇಜಿಗೆ ಬಂದ, ನಮ್ಮ ಕ್ಲಾಸ್ನವರೇ ಆದ ಗುಮ್ಮ ಮೋಹನ, ಮೆಂಟಲ್ ದ್ರುವ ಮತ್ತು ಕಾಗೆ ದಿಲೀಪ  ಇದ್ದರು. ಇವರ  ಬಗ್ಗೆ  ನಿಮಗೆ ಹೇಳಲೇ ಬೇಕು. 

ಮೋಹನ ಬೇರೆ ಊರಿನಲ್ಲಿ ರೂಮ್ ಮಾಡಿಕೊಂಡಿದ್ದ ಅಲ್ಲಿಂದ ದಿನಾ ಬಸ್ಸಿನಲ್ಲಿ ಕಾಲೇಜಿಗೆ ಬಂದು ಹೋಗುತಿದ್ದ. ಮೆಂಟಲ್ ದ್ರುವ, ಕಾಗೆ ದಿಲೀಪ ಮತ್ತು ಸೈಕ್ ಸುದರ್ಶನ ಹಿರೀಸಾವೆಯಲ್ಲಿ ರೂಮ್ ಮಾಡಿಕೊಂಡಿದ್ದರು. ಹಾಸ್ಟೆಲ್ ನ ಹುಡುಗರು ಬೇಜಾರಾದಾಗ ಬೆಳ್ಳೂರ್ ಕ್ರಾಸ್ ನಿಂದ ಹಿರೀಸಾವೆಗೆ ಗೆ ಹೋಗುತ್ತಿದ್ದರು. ಅಲ್ಲಿರುವ ಢಾಬಾದಲ್ಲಿ ಮೆಂಟಲ್ ಗುಂಪಿನ ಜೊತೆ ರಾತ್ರಿಯ ತಿಂಡಿ ತೀರ್ಥ ಮುಗಿಸಿಕೊಂಡು ಅಲ್ಲೇ ಅಂದರೆ ಮೆಂಟಲ್ ರೂಮಿನಲ್ಲೇ ಮಲಗಿ, ಬೆಳಗ್ಗೆ ಎದ್ದು ಹಾಸ್ಟೆಲ್ ಗೆ ಬರುತ್ತಿದ್ದರು. ಕೆಲವು ಬಾರಿ ಹುಡುಗರು ಫಿಲಂ ನೋಡಲು ಚನ್ನರಾಯಪಟ್ಟಣ ಕ್ಕೆ ಕೂಡ ಹೋಗುತ್ತಿದ್ದರು ಅಲ್ಲಿ ಫಿಲಂ ನೋಡಿ ನಂತರ ಗುಮ್ಮನ ರೂಮ್ನಲ್ಲಿ ಪಾರ್ಟಿ ಮಾಡಿ ಬರುತ್ತಿದ್ದರು. ಕೆಲವು ಬಾರಿ ಹಾಸ್ಟೆಲ್ ನಲ್ಲೆ ಅಖಾಡ ನಡೆಯುತ್ತಿದ್ದವು ಅವೆಲ್ಲ ಮುಗಿಯುತ್ತಿದ್ದದು ಬೆಳಗಿನ ಜಾವ 4 -5 ಗಂಟೆಗೆ. ಅಲ್ಲಿಗೆ ಕೆಲವು ಖಾಯಂ ಗಿರಾಕಿಗಳಿದ್ದರು, ಶಿಸ್ತು ಕೂಡ ಕೆಲವು ಬಾರಿ ಅಲ್ಲಿಗೆ ಹೋಗಿ ಒಂದು ಆಟ ಮುಗಿದ ತಕ್ಷಣ ಶಿಸ್ತಾಗಿ ಎದ್ದು ಬರುತ್ತಿದ್ದ. 

ಕ್ಲಾಸ್ ರೂಮಿನಲ್ಲಿ ನಡೆಯುತ್ತಿದೆ ಪ್ರಸಂಗ ಗಳೆ ಬೇರೆ.  ಮೆಂಟಲ್ ಕ್ಲಾಸ್ಸಿನಲ್ಲಿ ಕ್ಯೂ ಕ್ಯೂ  ಎಂದು ಕೂಗಿದ್ದು ಅದು ಕೂಗಿದ್ದು ಕಾಡು ಕೊತ್ತನಹಳ್ಳಿ ದೆವ್ವಕ್ಕೆ ಆದ್ರೆ ಕೇಳಿಸಿದ್ದು ಕವಿತಾ ಮೇಡಂಗೆ , ಅವರು ನನಗೆ ಮತ್ತು ಮೆಂಟಲ್ ಗೆ  ಕ್ಲಾಸಿನಿಂದ ಹೊರಗೆ ಹೋಗಬೇಕ ಎಂದು ಎಚ್ಚರಿಕೆ ಕೊಟ್ಟರು ನಮಗೆ ಆ ಎಚ್ಚರಿಕೆ ಬರಲಿಲ್ಲ ಎನ್ನುವುದು ಬೇರೆ ವಿಷಯ. 

ಒಂದು ದಿನ ಅವರು ಪಾಠ ಮಾಡುತ್ತಿದ್ದಾಗ ಕ್ಲಾಸಿನಲ್ಲಿ ಹುಡುಗರ ಕಡೆಯಿಂದ ಗಲಾಟೆ ನಡೆಯುತಿತ್ತು, ಅವರು ಎಷ್ಟು ಬಾರಿ ಸೈಲೆಂಟ್ ಸೈಲೆಂಟ್ ಎಂದು ಕೂಗಿದರೂ ಗಲಾಟೆ ಕಡಿಮೆಯಾಗಲಿಲ್ಲ ಕೊನೆಗೆ ಅವರು ಸಿಟ್ಟಾಗಿ " ನಿಮ್ಮ ತಲೇಲಿ ಸಾಮಾನಿಲ್ವಾ " ಅಂದರು ನಂತರ ನಗು ಮತ್ತು ಗಲಾಟೆ ಇನ್ನು ಹೆಚ್ಚಾಯಿತು . ಕೆಲವು ಗ್ರಾಮ್ಯ ಪದಗಳು ಉಂಟು ಮಾಡುವ ಅವಾಂತರ ಕಡಿಮೆಯಲ್ಲ. 

ರಾ ರಾ ಕ್ಲಾಸ್ ಗೆ ಬಂದಾಗ ಮಂಡ್ಯ ಸಾರ್ ಸಾರ್ ಫ್ಯಾನ್ ಆಫ್ ಮಾಡಿ ಇಲ್ಲ ಅಂದ್ರೆ ಅವಳು ಹಾರಿ ಹೋಗ್ತಾಳೆ ಎಂದು ಕೂಗಿದ್ದು, ಪೈ ಬಂದಾಗ 'ಸೌಪೈ'  'ಸೌಪೈ' ಎಂದು ಕೂಗಿದ್ದು. ಕಾಡಮ್ಮ ಬಂದಾಗ ಯಾರಿಗೂ ಕೂಡ ಮೀಟರ್ ಇರುತ್ತಿರಲಿಲ್ಲ ಕೂಗು ಹಾಕೋಕೆ, ಕಾಡು ಕೂಡ ಸುಮ್ನೆ ಕೂತಿರುತ್ತಿದ್ದ.  

ಒಂದು ಗುಂಪು ಅನುಮತಿಯಿಲ್ಲದೆ ಟೂರ್ ಗೆ ಹೋದದ್ದು,  ಹೋಗುವಾಗ ಕಾಲೇಜಿನ ಮುಂದಿನ ಕಾಂಪ್ಲೆಕ್ಸ್ ನಲ್ಲಿ ಪಟಾಕಿ ಹೊಡೆದು ಹೋದದ್ದು ಈ ವಿಷಯ HOD ಗೊತ್ತಾಗಿ ಅವರು ಟೂರ್ ಗೆ ಹೋದ ಎಲ್ಲರನ್ನು ಸಸ್ಪೆಂಡ್ ಮಾಡಿದ್ದು ನಂತರ ಒಂದು ವಾರದ ಬಳಿಕ ಮತ್ತೆ ಕ್ಲಾಸ್ ಗೆ ಸೇರಿಸಿದ್ದು ಅಧಿಕೃತ ಆದರೆ ಲಾಂಗ್ ವೀಕೆಂಡ್ ನಲಿ ರೋಮಿಯೋ ಜ್ಯೂಲಿಯೆಟ್ ಗಳ ಜೋಡಿ ಗುಂಪು ಸದ್ದಿಲದೆ ಟ್ರಿಪ್ ಮುಗಿಸಿಕೊಂಡು ಬಂದರು. ಅದಕ್ಕೆ ಹೇಳುವದು ಕತ್ತೆ ಕೂಡ ಕೆಲಸ ಮಾಡುತ್ತದೆ ಆದರೆ ಸ್ಮಾರ್ಟ್ ಆಗಿ ಕೆಲಸ ಮಾಡಬೇಕೆಂದು.  ಪಾಪ ಆ ಜೋಡಿ ಗುಂಪಿನಲ್ಲಿ ಒಂದು ಜೋಡಿ ಮಾತ್ರ ಮದುವೆಯಾಯಿತು ಉಳಿದವರು ಗುಪ್ತಪದ ವಾದರು (ಪಾಸ್ವರ್ಡ್) ಇಲ್ಲ ಮಗನ ಅಥವಾ ಮಗಳ ಹೆಸರಾದರು. 

ಮುಂದುವರಿಯುವುದು ......  ಯಾಕೆಂದರೆ ನೆನಪುಗಳು ಇನ್ನು ಮುಗಿದಿಲ್ಲ 





No comments:

Post a Comment

ನಿರುತ್ತರ

ನಿಮ್ಮಲ್ಲಿ ಭಾವನೆಗಳಿಲ್ಲ ಎಂದು ಅರ್ಥವಲ್ಲ ನನ್ನ ಹಾಗೆ ನಿಮಗೆ  ಭಾವನೆಗಳನ್ನು ವ್ಯಕ್ತಪಡಿಸಲು ಬರುವುದಿಲ್ಲ ಅಷ್ಟೇ.  ನಿಮಗೆ ಸಂತಸವಾಗುವುದಿಲ್ಲ ಎಂದು ಅರ್ಥವಲ್ಲ ನ...