Thursday, September 22, 2022

ಇಂಪೀರಿಯಲ್ ಬ್ಲೂ


 ಅದೊಂದು ದೊಡ್ಡ ಆಸ್ಪತ್ರೆ, ಆ ಆಸ್ಪತ್ರೆಯ ಹೊರಗಡೆ ದೊಡ್ಡ ದೊಡ್ಡ ಐಷಾರಾಮಿ ಕಾರುಗಳು, ಆಂಗ್ಲ ಮತ್ತು ಹಿಂದಿ ಭಾಷೆಯಲ್ಲೇ ಮಾತನಾಡುತ್ತಿರುವ ಜನಗಳು. ಸೂಟು ಬೂಟಿನ ಜನಗಳ ನಡುವೆ ತಾವು ಕಡಿಮೆ ಎಂದು ಮೂಲೆಯಲ್ಲಿ ನಿಂತಿರುವ ಕನ್ನಡದ ಜನಗಳು. 


ಅಲ್ಲಿನ ಮೂರನೇ ಅಂತಸ್ತಿನಲ್ಲಿರುವ ತುರ್ತು ನಿಗಾ ಘಟಕ ದಲ್ಲಿ, ಪತ್ನಿಯೊಬ್ಬಳು ತನ್ನ ಪತಿ ಗೆ ಹೇಳುತ್ತಿದ್ದಾಳೆ. 

ಪತ್ನಿ: ನಾನು ಏನಾದರು ಸತ್ತರೆ ಏನು ಮಾಡ್ತೀರಿ?

ಪತಿ : ಸುಮ್ನಿರು, ಹಾಗೆಲ್ಲ ಮಾತಾಡ್ಬಾರ್ದು. ನೀನು ಬೇಗ ಹುಷಾರಾಗ್ತೀಯ !

ಪತ್ನಿ: ಇಲ್ಲ, ನನಗೆ ಹಾಗೆ ಅನಿಸ್ತಾ ಇಲ್ಲ. ನಿಜವಾಗ್ಲೂ ನಾನು ಸತ್ತರೆ ನೀವು ಇನ್ನೊಂದು ಮದುವೆ ಆಗ್ತೀರ?

ಪತಿ: ಖಂಡಿತವಾಗಿ ಇಲ್ಲ; ನನಗೆ ಅಷ್ಟೊಂದು ಅದೃಷ್ಟ ಇಲ್ಲ😑

ಪತ್ನಿ: ನೀವು ನನ್ನ ಮೇಲೆ ಆಣೆ ಮಾಡಿ, ಮಾಡುವೆ ಆಗ್ತೀನಿ ಅಂತ. 

ಪತಿ: ಆಯಿತು  ನಿನ್ನ ಮೇಲೆ ಆಣೆ, ನಿನಗೋಸ್ಕರ ಒಂದು ಮದುವೆ ಆಗ್ತೀನಿ. 

ಪತ್ನಿ: ಒಳ್ಳೆಯದು, ಆಗಿದ್ರೆ ಅವಳು ಅವಳಿಗೆ ನನ್ನ ಬಟ್ಟೆ ಕೊಡ್ತೀರ ?

ಪತಿ: ಇಲ್ಲ. ನಿನ್ನ ಬಟ್ಟೆಗೆ ನೀನೆ ಮಾಲಕಿ, ಅವಳಿಗೆ ಕೊಡೋದಿಲ್ಲ ಅವಳಿಗೆ ಬೇಕಾದ್ರೆ ಯಾವುದಾದರು ಶೋರೂಮ್ ನಿಂದ ಕೊಡಿಸ್ತೀನಿ ಬಿಡು. 

ಪತ್ನಿ: ಅವಳು ನನ್ನ ಕಾರ್ ನ ಉಪಯೋಗಿಸ್ತಾಳ ?

ಪತಿ: ಇಲ್ಲ, ನಿನ್ನಕಾರ್ ಅನ್ನು ನಿನ್ನ ನೆನಪಿಗೋಸ್ಕರ ಆಗೇ ಇಡುತ್ತೇನೆ, ಅದು ತುಕ್ಕು ಇಡಿಯಲು ಶುರುವಾದರೆ ಗುಜರಿ ಸಾಬರಿಗೆ ಕೊಡುತ್ತೇನೆ. ಅವಳಿಗೆ ಬೇಕಾದ್ರೆ ಹೊಸ ಕಾರು ತೆಗೆದು  ಆಯಿತು. 

ಪತ್ನಿ: ಅವಳು ನನ್ನ ಚಪ್ಪಲಿಗಳನ್ನು ಉಪಯೋಗಿಸ್ತಾಳ ?

ಪತಿ: ಇಲ್ಲ ನಿನ್ನ ಸೈಜ್ ಅವಳಿಗೆ ಆಗೋದಿಲ್ಲ,ಅವಳು ಎತ್ತರದ (ಹೈ ಹೀಲ್ಡ್ ) ಚಪ್ಪಲಿ ಗಳನ್ನು ಉಪಯೋಗಿಸಲ್ಲ, ಅದು ಅಲ್ಲದೆ ಅವಳ ಚಪ್ಪಲಿ ಸೈಜ್ 5 ಅದು ನಿನಗಿಂತ ಚಿಕ್ಕದು ಅಂದ

Pyar ki raho mein chalna sikh   😜 

👏     👏     👏     👏     👏     👏       👏        👏     👏      👏

ಪತಿ - ಪತ್ನಿ ಪಾರ್ಕ್ನಲ್ಲಿ ವಾಕಿಂಗ್ ಮಾಡುತಿದ್ದರು; ಅಷ್ಟ್ರಲ್ಲಿ ಗಂಡ ಕುಸಿದು ಬಿದ್ದ. 

 ಗಂಡ: ನನಗೆ ಪಕ್ಕೆ ನೋವ್ತಾ ಇದೆ, ಬೇಗ ಡಾಕ್ಟರ್ ಕರಿ ಅಂದ. 

ಹೆಂಡತಿ: ಆಯಿತು, ಗಾಬರಿಯಾಗ ಬೇಡಿ, ನಿಮ್ಮ ಮೊಬೈಲ್ನ ಪಾಸ್ವರ್ಡ್ ಹೇಳಿ; ಅದನ್ನು ಓಪನ್ ಮಾಡಿ ಕರೆಯುವೆ ಎಂದಳು. 

ಗಂಡ :  ಅಬ್ಬಾ . ಈಗ ಸ್ವಲ್ಪ ಪರವಾಗಿಲ್ಲ. ನಡಿ ಮನೆಗೆ ಹೋಗೋಣ ಅಂದ . 


🔦      🔦     🔦    🔦    🔦    🔦     🔦    🔦         🔦     🔦      


ಪತಿ: ಏನೇ, ಪೇಪರ್ ನಲ್ಲಿ ಜನಮೇಜಯ ಅಂತ ಇದೆ. ಆಗಂದ್ರೆ ಏನು ಗೊತ್ತಾ ನಿನಗೆ ?

ಪತ್ನಿ: ಮೊಬೈಲ್ ನೋಡುತ್ತಾ " ಮೇ ತಿಂಗಳ ಚುನಾವಣೆಯಲ್ಲಿ ಗೆದ್ದ ಬಂದ ಜನ ಅಂತ " ಅಷ್ಟು ಗೊತ್ತಾಗಲ್ವಾ ನಿಮಗೆ ಅಂದಳು. 

ಇವಳಿಗಿಂತ ನನ್ನ ಶಾಲೆಯ ಮಕ್ಕಳೇ ವಾಸಿ ಅಂತ ಎದ್ದು ಶಾಲೆಗೇ ಬಂದನು. ಶಾಲಾ ತರಗತಿಯಲ್ಲಿ ಮಕ್ಕಳನ್ನು ಪ್ರಶ್ನೆ ಕೇಳಿದನು. 

ಶಿಕ್ಷಕ: ದಾನಗಳಲೆಲ್ಲ ದೊಡ್ಡ ದಾನ ಯಾವುದೋ ಗುಂಡ?

ಗುಂಡ: ಸಾ! ಅದು ಮೈದಾನ ಸರ್ !

ಶಿಕ್ಷಕ : ಲೋ ಕಿಟ್ಟಿ ಹಾಸ್ಪಿಟಾಲಿಟಿ ಅಂದರೇನು?

ಕಿಟ್ಟಿ: ಆಸ್ಪತ್ರೆಯಲ್ಲಿ ಕೊಡುವ ಟೀ! ಸಾರ್ 

🕵                           🕵                          🕵                                  🕵
 

Thursday, September 15, 2022

ಪರಿಧಿ

 

ಜೊತೆಗೆ ಯಾರು ಇರದ ಕಾರಣ ಹತ್ತಿರದ ಬಾರ್ ನಲ್ಲಿ ನಾನು ಒಬ್ಬನೇ  ಕುಳಿತು ಕುಡಿಯುತಿದ್ದೆ. ನನ್ನ ಪಕ್ಕದ ಟೇಬಲ್ನಲ್ಲಿ 50 ವರ್ಷ ಮೀರಿದ ನಾಲ್ಕು - ಐದು ಜನ ಅಂಕಲ್ಗಳು ಕುಳಿತ್ತಿದ್ದಾರೆ.ಅವರ ಟೇಬಲ್ನಲ್ಲಿ ಅರ್ಧ ಖಾಲಿಯಾದ ಕರಿ ನಾಯಿ ಮತ್ತು ತುಂಬಿರುವ ಎಂಟು ಗಂಟೆ ಇದೆ.  ಅವರ ಮಾತುಕಥೆಯ ಮಧ್ಯದಲ್ಲಿ ಅವರಲ್ಲಿ ಒಬ್ಬರು ಪಕ್ಕದಲ್ಲಿದ್ದ ಇನ್ನೊಬರ ಬೆನ್ನಿಗೆ ಐಸ್ ಕ್ಯೂಬ್ ಅನ್ನು ಹಾಕಿ ಮಜ ತೆಗೆದು ಕೊಳ್ಳುತ್ತಿದ್ದಾರೆ 😀😄.

 ಎಷ್ಟೊಂದು ಮಜವಾಗಿದೆ ಇವರ ದುನಿಯಾ ಅಂದುಕೊಂಡೆ. ಅಷ್ಟರಲ್ಲಿ ಒಬ್ಬ ತನ್ನ ದಿನಚರಿಯ ಬಗ್ಗೆ ಜೊತೆಗಿದ್ದವರ ಜೊತೆ ಹೇಳುತ್ತಾ ಇದ್ದ  " ಇವತ್ತು ಮೀಟಿಂಗ್ ನ ಮದ್ಯದಲ್ಲಿ ಅವನ ಚೊಟ್ಟ ಮುಖ ನೋಡಿದೆ ಅದರಿಂದ ದಿನವೆಲ್ಲ ಹಾಳಾಯ್ತು " ಅಂದ. 


ಇಲ್ಲಿನ ಸರ್ವರ್ ಗಳೆಲ್ಲ ಸೂಪರ್ ಅಂದ್ರೆ ಸೂಪರ್ ಯಾಕೆಂದ್ರೆ ಈಗ ಸರ್ವರ್  ಒಬ್ಬನು, ನಾನು ತಿನ್ನದೇ ಇದ್ದ ಈರುಳ್ಳಿ ಬೋಂಡ ಮತ್ತು ಚಿಕನ್ ಕೆಬಾಬ್ ಅನ್ನು ತಟ್ಟೆಯಿಂದ ಮುಚ್ಚಿಟ್ಟ.

ಇದು ದೊಡ್ಡ ವಿಷಯವಲ್ಲ ಆದರೆ ಬಾರಿ ಖುಷಿ ಕೊಡುವ ವಿಷಯ. ಇಷ್ಟೊಂದು ಅಕ್ಕರೆಯನ್ನು ದೊಡ್ಡ ದೊಡ್ಡ ಹೋಟೆಲ್ಗಳಲ್ಲಿ ಸಿಗುವುದು ಕೂಡ ಅಪರೂಪ. 

ಕಡೆಯ ಇನ್ನೊಂದು ಟೇಬಲ್ನಲ್ಲಿ ಒಂದು ಗುಂಪಿನಲ್ಲಿ ಆಕಸ್ಮಿಕ ಗಾಯನ ನಡೆಯುತಿತ್ತು, ಅವರು ಮೈನೆ ಪ್ಯಾರ್ ಕೀಯ ಅನ್ನುವ ಹಿಂದಿ ಚಿತ್ರದ ಮೇರೇ ರಂಗ್ ಮೇ ರಂಗನೇವಾಲಿ" ಹಾಡನ್ನು ಹಾಡುತ್ತ ಇದ್ದರು ಕೆಲವರಂತೂ ಫುಲ್ ಜೋಶ ನಲ್ಲಿ ಇದ್ದರು ಅಂತ ಕಾಣಿಸ್ತಾ ಇತ್ತು ಯಾಕಂದರೆ " ಮೇರೇ ಸವಾಲೊಂಕ ಜವಾಬ್ ದೊ !! ದೋನ !!! " ಅನ್ನೋ ಸಾಲನ್ನ ಒತ್ತಿ ಹಾಡುತ್ತಾ ಇದ್ದರು. 

ಇನ್ನೊಂದು ಟೇಬಲ್ನಲ್ಲಿ ಇಬ್ಬರು ಗೆಳೆಯರು ಕುಳಿತಿದ್ದರು. ಮದ್ಯ ಕುಡಿದು ಸ್ವಲ್ಪ ಹೊತ್ತಿನ ಬಳಿಕ ಒಬ್ಬ ಅಳುತ್ತ ಇದ್ದ, ಇನ್ನೊಬ್ಬ ಅವನಿಗೆ ಯಾಕೆ ಅಂತ ಕೇಳಿದಾಗ ಅದಕ್ಕೆ ಅವನು ನಾನು ಚಿಕ್ಕಮಗಳೂರಿಗೆ ಹೋಗುವುದಿಲ್ಲ ಅಲ್ಲಿಗೆ ಹೋದರೆ ನನ್ನ ಗೆಳತಿ ನನಗೆ ಹೆದರಿಸ್ತಾಳೆ. ಇಲ್ಲೇ ಇರ್ತೀನಿ ಅಂತ ಇನ್ನು ಅಳು ಜೋರು ಮಾಡಿದ.  
ಅದಕ್ಕೆ ಅವನ ಗೆಳೆಯ ಹೇಳಿದ ನೀನು ಚಿಕ್ಕಮಗಳೂರಿಗೆ ಹೋಗೋದು ರಜಾ ಬಂ ಮೇಲೆ ಆದರೆ ನಾನು ಮನೆಗೆ ಹೇಗೆ ಹೋಗೋದು ಅಂತ ಹೇಳು. ಕೊನೆಯ ಸರಿ ಕುಡಿದು ಹೋದಾಗ ನಮ್ಮಮ್ಮ ಪೊರಕೆ ತೆಗೆದುಕೊಂಡು ಬಡಿದಿದ್ದರು ಅದಕ್ಕೆ ಇವತ್ತು ನಿನ್ನ ರೂಮಿನಲ್ಲೇ ಮಲಗ್ತೀನಿ ಆಯ್ತಾ ಅಂದ. 

ನನ್ನ ಎಡ ಭಾಗದ ಟೇಬಲ್ನಲ್ಲಿ ಒಬ್ಬ ತನ್ನ ನಾಲ್ಕನೆಯ ಸಿಗರೇಟ್ ಅನ್ನು ಬಾಯಿಗೆ ಇತ್ತು ಬೆಂಕಿ ತಾಗಿಸ್ತಾ ಇದ್ದ ಅವನ ಜೊತೆ ಇಬ್ಬರಿದ್ದರು. ಬಹುಶ ಇದು ನಾನು ಕೆಲಸ ಬಿಡುವ ತನಕ ನನ್ನನ್ನು ಬಿಡುವುದಿಲ್ಲ ಅನಿಸುತ್ತೆ ಅಂದ. ಅದಕ್ಕೆ ಇನ್ನೊಬ್ಬ ಅಲ್ಲಿಯ ತನಕ ನೀನೆ ಇರುವುದಿಲ್ಲ ಬಿಡು; ನೀನು ಸಿಗರೇಟ್ ಗೆ ಹೊಗೆ ಹಾಕಿದ್ದಿಯ ಅದು ನಿನಗೆ ಖಂಡಿತವಾಗಿ ಹೊಗೆ ಹಾಕೆ-ಹಾಕುತ್ತೆ ಬಿಡು ಅಂದ. 

ಅಷ್ಟ್ರಲ್ಲಿ ಅಂಕಲ್ ಗಳ ಟೇಬಲ್ ಗೆ ಬಿಲ್ ಬಂದಿತು, ಎಲ್ಲ ನಾನು ಕೊಡ್ತೀನಿ ನಾನು ಕೊಡ್ತೀನಿ ಅಂತ ಕಿತ್ತಾಡ್ತಾ ಇರಬೇಕಾದ್ರೆ ಸರ್ವರ್ ಬಿಲ್ ಅನ್ನು ದಿನಾ ಬರುವ ಅಂಕಲ್ ಕೈಗೆ ಕೊಟ್ಟ. ಬೇರೆಯವರು ಕೇಳಿದಾಗ ಯಾವುತ್ತೋ ಒಮ್ಮೆ ಬರುವ ನೀವು ನೆಂಟರು ಅಂದ. 

ಸರಿ, ಎರಡು ಬಾಟಲಿ ಕುಡಿದ ನಂತರ ಶೌಚಾಲಯ ಕೆ ಹೋಗೋಣ ಎಂದು ಎದ್ದು ಹೋದೆ, ಅಲ್ಲಿ ನೋಡಿದರೆ ಒಬ್ಬ ಅಂಕಲ್ ಕ್ಯೂ ನಲ್ಲಿ ನಿಂತಿದ್ದರು, ಎಷ್ಟು ಹೊತ್ತಾದರೂ ಶೌಚಾಲಯದ ಬಾಗಿಲು ತೆರೆಯಲೇ ಇಲ್ಲ. ಬಾಗಿಲು ತಟ್ಟಲು ಹೋದರೆ ಬಾಗಿಲು ತೆಗೆದು ಕೊಳ್ತು ನೋಡಿದರೆ ಒಳಗಡೆ ಯಾರು ಇಲ್ಲ😁. ಯಾರೋ ಪುಣ್ಯಾತ್ಮ ಬಾಗಿಲು ಹಾಕಿ ಹೋಗಿದಾನೆ ಅಷ್ಟೇ. 

ಸರ್ವರ್ ಬಂದು ಕೊನೆಯ ಆರ್ಡರ್ ಹೇಳಿ ಸಮಯವಾಯ್ತು ಅಂದ ಅದಕ್ಕೆ ನಾನು ನನ್ನ ಕೊನೆಯ ಆರ್ಡರ್ ಮಾಡಿ ಅರ್ಧ ಗಂಟೆ ಆಯ್ತು, ದಾಲ್ ಖಿಚಡಿ ಕೊಡು ಅಂದೆ ಅಷ್ಟ್ರಲ್ಲಿ ಲೈಟ್ಗಳು ಒಂದೊಂದಾಗಿ ಆಫ್ ಆಯಿತು. ನಾನು ನನ್ನ ಮೊಬೈಲ್ ನ ಸ್ಕ್ರೀನ್ ನೋಡ್ತಾ ಖಿಚಡಿ ತಿಂದ ಇದ್ದೆ. ಕೇವಲ ನಿಜ ಹೇಳಿದಕ್ಕೆ ನನ್ನ ಜೊತೆ ಕೊಪಿಸ್ಕೊಂಡು ಇನ್ನು ಕ್ಷಮಿಸದೇ ಇರುವ ಸ್ನೇಹಿ* ಗೆ ಕ್ಷಮೆಯಾ ಧರಿತ್ರಿ ಎಂದು ಹೇಗೆ ಹೇಳುವುದು ಎಂದುಕೊಂಡು ಗ್ಲಾಸ್ ಅನ್ನು ಖಾಲಿ ಮಾಡಿದೆ. 

ಅಷ್ಟ್ರಲ್ಲಿ ಟೇಬಲ್ನಲ್ಲಿ ಬಿಲ್ಲು ಬಂದಿತ್ತು, ಅದನ್ನು ತೆಗೆದು ನೋಡಿ ಜೊತೆಗೆ ಸ್ವಲ್ಪ ದಕ್ಷಿಣೆ ಇಟ್ಟು ಎದ್ದು ಹೊರಗೆ ಬಂದೆ. ಅಷ್ಟರಲ್ಲಿ ಮಳೆ ಶುರುವಾಯ್ತು ಓಡಿ ಓಡಿ ಮನೆ ಸೇರಿಕೊಂಡೆ. 

ನಿದ್ದೆ ಬರದೇ ಇದುದ್ದರಿಂದ ಎದ್ದು ಕಂಪ್ಯೂಟರ್ ಬಳಿ ಕುಳಿತು ಈ ಲೇಖನ ನಿಮಗಾಗಿ ಬರೆದೆ. ಆದರೆ  "ನನ್ನ ಬಾಳ ಪುಟದಲಿ ಬರೆದಿದ್ದು" ಬೇರೆ ಯಾರೋ . 

                                               🙏🙏🙏🙏🙏🙏🙏🙏🙏

Saturday, September 10, 2022

ಸಮುದ್ರಂ

 


                                              ನನ್ನ ಅಪ್ಪ ಕಟ್ಟಿ ಕೊಟ್ಟಿದ್ದ ಸುಂದರ ಬದುಕು; ಕೆಲವರ ಸ್ವಾರ್ಥ ಸಾಧನೆಯ  ಪ್ರಯತ್ನಕ್ಕೆ ನಾನು ಮಣಿಯದೆ ಇದ್ದಾಗ ಇನ್ನೇನು ಮುಳುಗುವ ಹಂತದಲ್ಲಿತ್ತು. ಮನೆಯಲ್ಲಿ ಎಲ್ಲರೂ ಸಾಮಾನ್ಯವಾಗಿದ್ದರೂ ಒಳಗೆ ಯಾರಿಗೂ ಖುಷಿ ಮತ್ತು ಸಮಾಧಾನವಿರಲಿಲ್ಲ.  ಅತ್ತ ನನ್ನ ಗೆಳೆಯ ತನ್ನ ಬದುಕು ಕಟ್ಟಿಕೊಳ್ಳಲು ದೂರದ ದಕ್ಷಿಣ ಆಫ್ರಿಕಾ ದೇಶದಲ್ಲಿ ಹೋರಾಟ ಮಾಡುತ್ತಿದ್ದ. ನನಗೆ ಅವನೊಡನೆ ಸಂಪರ್ಕಿಸಲು ಇದ್ದ ಮಾರ್ಗವೊಂದೆ ಅದು ಗೂಗಲ್ ಚಾಟ್ ಸೇವೆ. ದೂರದ ಬೆಟ್ಟ ನುಣ್ಣಗೆ (ಎಲ್ಲವು ಹಾಗೆ ಅಲ್ಲವೇ?) ಹಾಗೆ ಅಲ್ಲಿನ ಸಂಸ್ಥೆ ಕೇವಲ ಬಾರತೀಯರನ್ನೇ ಅಲ್ಲಿ ನೇಮಕ ಮಾಡಿಕೊಳ್ಳುತಿತ್ತು ಮತ್ತು ಅವರ ಪಾಸ್ಪೋರ್ಟ್ ಮತ್ತು ಅಂಕ ಪಟ್ಟಿಗಳನ್ನು ಎರಡು ವರ್ಷದ ಅವಧಿಗೆ ವಶ ಪಡಿಸಿಕೊಳ್ಳುತಿತ್ತು. 

 ಗೆಳೆಯನ ಜೊತೆ ಮಾತು-ಕಥೆ-ವ್ಯಥೆಯೆಲ್ಲವೂ ಗೂಗಲ್ ಚಾಟ್ ಮೂಲಕವೇ ನಡೆಯುತಿತ್ತು. ಅವನಿಗೋ ಹೇಗಾದರೂ ಭಾರತಕ್ಕೆ ಬರಬೇಕೆಂದು ಆಸೆ ಆದರೆ ಅಲ್ಲಿನ ಮಾಲೀಕ ನಮ್ಮ ಒಪ್ಪಂದ ಮೂರು ವರ್ಷ ಇರುವುದು ಬೇಗ ಭಾರತಕ್ಕೆ  ಹೋಗಬೇಕಾದರೆ ಕೆಲವು ಲಕ್ಷ ರೂಪಾಯಿಗಳನ್ನು ಕಟ್ಟಿ ಹೋಗು ಅಂತ ಹೇಳಿ ಎಲ್ಲರಿಗು ಹೆದರಿಸುತ್ತಿದ್ದಇಂತ: ಸಮಯದಲ್ಲಿ ಯಾರಿಗಾದರೂ ನಾನು ಪ್ರವಾಸ ಹೋಗುತ್ತಿದ್ದೇನೆ ಎಂದು ಹೇಳಿದರೆ ಅವರು ನಕ್ಕು ಬಿಡುತ್ತಿದ್ದರು. ಇವನ ಅಂಡಿಗೆ ಬೆಂಕಿ ಬಿದ್ದಿದೆ ಆದರೂ  ಪ್ರವಾಸ ಹೋಗುವ ಹುಚ್ಚು ಎಂದು. 

 ಯಾವುದೊ ಪವಾಡ ನಡೆದು ಆಫ್ರಿಕಾದೇಶದಲ್ಲಿದ್ದ ಸ್ನೇಹಿತ, ಭಾರತಕ್ಕೆ ಮುಂದಿನ ತಿಂಗಳು ಬರುವೆ ಎಂದು ತಿಳಿಸಿದ, ಬಂದ ನಂತರ ಎಲ್ಲಿಗಾದರೂ ಹೋಗುವ ತುಂಬಾ ಬೇಜಾರಾಗಿದೆ ಎಂದ. ಸರಿ ಎಲ್ಲಿಗೆ ಹೋಗುವುದು ಎಂಬ ಯೋಚನೆ ಶುರುವಾಯಿತು.  ಇತ್ತ ಮನದಲ್ಲಿ ಬೇಸರ, ಜೊತೆಗೆ ಆಗಿದ್ದು ಆಗಲಿ ಒಂದು ಕೈ ನೋಡೇ ಬಿಡುವ ಎಂಬ ಹುಂಬತನ. ಸಮುದ್ರತೀರ ಎಂದರೆ ಅದೇನೋ ಸೆಳೆತ. ಸಮುದ್ರದ  ಮುಂದೆ ಕುಳಿತು ಅದರ ಅಲೆಗಳು ನಮ್ಮ ಕಾಲುಗಳ  ಬಳಿ ಬಂದು ವಾಪಾಸ್ಸು ಹೋಗುವುದೇ ಚೆಂದ.  ಜೊತೆಗೆ ಮರಳನ್ನೂ ಓಯ್ಯುವಾಗ ಕಾಲ ಬಳಿ ಉಂಟಾಗುವ ಕುಸಿತ ಮತ್ತು ಅಲೆಗಳು  ಹೆಚ್ಚಾಗಿ ನಮ್ಮ ಬಟ್ಟೆಯನ್ನು ತೋಯಿಸಿದಾಗ ಉಂಟಾಗುವ ಭಾವವೇ ನಮ್ಮ ಸ್ವಭಾವ :)

 ಗೋವಾಗೆ ಹೋಗೋಣ ಎಂದರೆ ಅಲ್ಲಿನ ಜನ ಜಂಗುಳಿ, ಕುಡುಕ ಮಿತ್ರರ ಹಾವಳಿ, ಪಬ್ ಸಂಸ್ಕೃತಿ ಸಾಕು ಸಾಕು ಅನಿಸಿತು. ಎಲ್ಲಿಗಾದರೂ ದೂರ ಬಹು ದೂರ ಹೋಗುವ ಬಾರ (ಕುವೆಂಪು ರಚಿತ ಬಾವಗೀತೆ) ಎಂದೆನ್ನಿಸಿ ನಿರ್ಜನ ಸಮುದ್ರ ತೀರಗಳ ಬಗ್ಗೆ ಹುಡುಕಿದಾಗ ಸಿಕ್ಕಿದ್ದೇ ಹವಳದ ದ್ವೀಪಗಳು.  ಗೂಗಲ್ ನಲ್ಲಿ ಲಕ್ಷದ್ವೀಪಗಳಿಗೆ ಹೋಗುವ ದಾರಿಗಳ ಬಗ್ಗೆ ಮತ್ತು ಪ್ರವಾಸದ ಬಗ್ಗೆ ಎಲ್ಲ ಹುಡುಕಿ ತೆಗೆದು, ಅಳೆದು ಟೂರ್ ಬಗ್ಗೆ ಪಿ. ಹೆಚ್. ಡಿ. ಮಾಡಿದ ನಂತರ ಒಂದು ಮಟ್ಟದ ಅರಿವು ಬಂತು. 

 ಕೇರಳದ ಎರ್ನಾಕುಲಂ ಪಟ್ಟಣದಲ್ಲಿರುವ ಟ್ರಾವೆಲ್ ಸಂಸ್ಥೆಯಿಂದ ನಮ್ಮ ಟೀಕೆಟ್ ಅನ್ನು ಕಾಯ್ದಿರಿಸಿದೇವು.   ಸಂಸ್ಥೆ ಸ್ಪೋರ್ಟ್ಸ್ ಅನುಮತಿ ಪಡೆದಿತ್ತು (ಲಕ್ಷದ್ವೀಪ ಪ್ರವಾಸ ಸಂಸ್ಥೆಯ ಹೆಸರು ಸ್ಪೋರ್ಟ್ಸ್ ಎಂದು). ನಾವು ಬೆಂಗಳೂರಿನಿಂದ ಮಂತ್ರಾಲಯವನ್ನು ರೈಲಿನಲ್ಲಿ ತಲುಪಿ ಅಲ್ಲಿ ಸ್ನಾನ ಮಾಡಿ ಗುರು ರಾಯರ ದರ್ಶನ ಪಡೆದು, ನಂತರ ಅಲ್ಲಿರುವ ಕೆಟ್ಟ ಹೋಟೆಲ್ನಲ್ಲಿ ತಿಂಡಿ ತಿಂದು ರೂಮಿಗೆ ಹೋಗಿ ಮಲಗಿದೆವು, ಸಂಜೆಯ ವೇಳೆಗೆ ಎರ್ನಾಕುಲಂ ಗೆ ಹೋಗುವ ರೈಲನ್ನು ಹತ್ತಿ ಮಲಗಿದೆವು ಬೆಳಗ್ಗೆ ಎಚ್ಚರವಾದಾಗ ಸಮಯ 4 ಗಂಟೆ, ರೈಲು ಯಾವುದೊ ಒಂದು ನಿಲ್ದಾಣದಲ್ಲಿ ನಿಂತಿತ್ತು. ನಮ್ಮ ಸ್ಟೇಷನ್ ಬರುವುದು 5 ಗಂಟಿಗೆ ಎಂದು ನಾನು ಸುಮ್ಮನಾದೆ, ಗೆಳೆಯ ಕೆಳಗಡೆ ಇಳಿದು ಹೋಗಿ ನೋಡಿ ಬಂದು ಗುರು ಇದು ನಮ್ಮದೇ ನಿಲ್ದಾಣ ಅಂದ. ಅಲ್ಲಿ ಕೇಳಲು ಯಾರೂ ಇರಲಿಲ್ಲವಾದ್ದರಿಂದ ನಮ್ಮ ಲಗೇಜ್ ಸಮೇತ ಕೆಳಗಿಳಿದೆವು. ಓಯೋನ ರೂಮ್ನ ಕೊನೆಗೂ ಹುಡುಕಿ ಅಲ್ಲಿ ಹೋಗಿ ಮಲಗಿದ್ದು ಸುಮಾರು 6 ಗಂಟೆಗೆ. ನಂತರ ಎದ್ದು ತಿಂಡಿ ಮತ್ತು ಊಟ ಮುಗಿಸಿ ಕಾರ್ ನಲ್ಲಿ ವಿಲ್ಲಿಂಗ್ಡವ್ನ್ ಐಲ್ಯಾಂಡ್ ಗೆ ಹೋದೆವು. ಅಲ್ಲಿಂದ ಹಡಗನ್ನು ಏರಿ,

ಅವರು ಕೊಟ್ಟ ಟೀ ಬಿಸ್ಕತ್ ಅನ್ನು ಸೇವಿಸಿ ನಮ್ಮ ರೂಮಿನಲ್ಲಿ ವಿಶ್ರಾಂತಿ ಪಡೆದವುಸ್ವಲ್ಪ ಹೊತ್ತಿನ ಬಳಿಕ ಹಡಗು ಎರ್ನಾಕುಲಂ ಅನ್ನು ಬಿಟ್ಟು ಹೊರಟಿತು.

ರಾತ್ರಿಯ ಊಟ ಸುಮಾರು ಎಂಟು ಗಂಟೆಗೆ ಊಟದ ಮೊದಲು ಊಟದ ಡಂಗುರ ಸಾರಿಸಿ ಊಟ ತಯಾರಾಗಿದೆ ಎಂದು ಹೇಳಿದ ಬಳಿದ ಊಟ. ಊಟದ ಮೆನುವಿನಲ್ಲಿ ಸಸ್ಯಾಹಾರಿ ಮತ್ತು ಮಾಂಸಹಾರಿ ಗಳಿಗೆ ಪ್ರತ್ಯೇಕ ಕೌಂಟರ್ ಗಳಿದ್ದವು. ನಾವು ಎರಡು ಕೌಂಟರ್ನಲ್ಲಿ ಊಟ ಮಾಡಿ ಬಂದು ತುಂಬಾ ಹೊತ್ತಿನ ತನಕ ಮಾತಾನಾಡಿ ಮಲಗಿದೆವು. ಬೆಳಗ್ಗೆ ಎದ್ದಾಗ ಹಡಗು ಆಗಲೇ ನಿಂತಿತ್ತು. ನೋಡಿದಾಗ ಕನಸಿನಲ್ಲಿ ನೋಡಿದಹಾಗೆ ಇತ್ತು. ತಿಂಡಿ ತಿಂದು ನಮ್ಮನ್ನು ಕರೆದೊಯ್ಯಲು ಬಂದಿದೆ ಸಣ್ಣ ದೋಣಿ ಏರಿ ಕಲ್ಪೆನಿ ದ್ವೀಪಕ್ಕೆ ಹೋದೆವು. 

 ದ್ವೀಪದ ಹತ್ತಿರ ಆಳ ಸಾಕಾಗದ ಕಾರಣ ಹಡಗನ್ನು ದೂರದಲ್ಲೇ ಲಂಗರು ಹಾಕಿ, ಚಿಕ್ಕ ಚಿಕ್ಕ ಬೋಟ್ಗಳಲ್ಲಿ ದ್ವೀಪಕ್ಕೆ ಕರೆದೊಯ್ದು ಮತ್ತು ವಾಪಾಸ್ ಕರೆತರುತ್ತಾರೆ. ಅಂದಿನ ಹಗಲೆಲ್ಲವನ್ನು ದ್ವೀಪದಲ್ಲೆ ಕಳೆದು ಸಂಜೆಯ ವೇಳೆಗೆ ಮತ್ತೆ ಹಡಗಿಗೆ ವಾಪಾಸ್ ಬಂದೆವು. ಮದ್ಯಾನ್ನ ಊಟದಲ್ಲಿ ಮೀನು ಮತ್ತು ಕೋಳಿ ಇದ್ದವು. ಊಟ ಮತ್ತು ಆಟಗಳು ಸೊಗಸಾಗಿದ್ದವು. ಸಂಜೆ ಹಡಗಿಗೆ ಬಂದ ನಂತರ ನಾವು ರೂಮಿಗೆ ಹೋಗದೆ ಹಡಗಿನ ಡೆಕ್ ನಲ್ಲಿ ಕುಳಿತು ಹಳೆಯ ಕನ್ನಡ ಹಾಡುಗಳನ್ನು ಕೇಳುತ್ತ ಮತ್ತು ಹರಟೆ ಹೊಡೆಯುತ್ತ ಕುಳಿತಿರುತಿದ್ದೆವು.  ಅಲೆಗಳ ಶಬ್ದ ಮತ್ತು ಹಡಗು ನೀರನ್ನು ಸೀಳಿಕೊಂಡು ಹೋಗುವ ಶಬ್ದ ನನ್ನನ್ನು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗುತ್ತಿದ್ದವು. ರಾತ್ರಿ ಊಟದ ಗಂಟೆ ಯಾವಾಗ ಬಾರಿಸುವುದೋ ಎಂದು ಕಾಯ್ದು; ಗಂಟೆ ಬಾರಿಸಿದ ತಕ್ಷಣ ಹೋಗಿ ಚೆನ್ನಾಗಿ ಬ್ಯಾಟಿಂಗ್ ಮಾಡಿ ಬಂದು ಮತ್ತೆ ಡೆಕ್ ನಲ್ಲಿ ಕುಳಿತು ನಂತರ ಮಲಗಲು ರೂಮಿಗೆ ಹೋಗುತಿದ್ದೆವು. 

 ಎರಡನೆಯ ದಿನ ಕವರಟ್ಟಿ ದ್ವೀಪ ಮತ್ತು ಮೂರನೆಯ ಹಾಗೂ ಕಡೆಯ ದಿನ ಮಿನಿಕಾಯ್ ದ್ವೀಪ ನೋಡಿದೆವು. ಇದರಲ್ಲಿ ಕವರಟ್ಟಿ ಲಕ್ಷದ್ವೀಪದ ರಾಜಧಾನಿ ಇದು ಭಾರತದ ಕೇಂದ್ರಾಡಳಿತ ಪ್ರದೇಶ. ಇಲ್ಲಿ ನಾವು ಮತ್ತು ನೀವು ನೆಲಸಲು ಆಗುವುದಿಲ್ಲ ಏನಿದ್ದರೂ ನೆಂಟರ ತರಹ ಹೋಗಿ ಬರಬಹುದಷ್ಟೆ. ಇರುವುದರಲ್ಲಿ ಮನಿಕಾಯ್ ದ್ವೀಪ ಅತ್ಯಂತ ಸುಂದರವಾದ ದ್ವೀಪ, ಇಲ್ಲಿಂದ ಮಾಲೆ ಮಾಲ್ಡೀವ್ಸ್ನ ರಾಜಧಾನಿ ಕೇವಲ 60 ಕಿಲೋಮೀಟರ್ ಗಳು.  ನೋಡುವುದಕ್ಕೆ ಮಿನಿಕಾಯ್ ಮಾಲ್ಡೀವ್ಸ್ ತರಾನೇ ಇದೆ. ಅಣ್ಣ ತಮ್ಮನ ಮಕ್ಕಳು ಒಂದೇ ತರ ಇರುವಂತೆ. 

 ನಮ್ಮ ಹಡಗು ಮಿನಿಕಾಯ್ ನಿಂದ ಹೊರತು ಮಾರನೆಯ ದಿನ ಬೆಳಗ್ಗೆ ಎರ್ನಾಕುಲಂ ತಲುಪಿತು. ಅಲ್ಲಿಂದ ಬಂದು ಎರ್ನಾಕುಲಂ ರೂಮ್ನಲ್ಲಿ ಎರಡು ದಿನ ವಿಶ್ರಾಂತಿ ಪಡೆಯಬೇಕಾಯ್ತು. ನನಗೆ ತುಂಬಾ ಶೀತ ಮತ್ತು ಕಫ ಉಂಟಾಗಿತ್ತು. ಸ್ವತಃ ವೈದ್ಯ ಮಾಡಿಕೊಂಡು ಮೂರು-ನಾಲ್ಕು ತರಹ ಮಾತ್ರೆ ತೆಗೆದುಕೊಂಡು ಬರಿ ಮಲಗಿದ್ದಾಯ್ತು. ಎಚ್ಚರವಾದಾಗ ಮಲಬಾರ್ ಹೋಟೆಲ್ನ ಊಟ ಮತ್ತೆ ನಿದ್ದೆ. ನನಗೋಸ್ಕರ ಗೆಳೆಯ ಎಲ್ಲವನ್ನು ಸಹಿಸಿಕೊಂಡ. ಗೆಳೆಯ ಎಂದರೆ ಹಾಗೆಯೇ? ಅಥವಾ ಅಲ್ಲೂ  ಕಟ್ಟು-ಪಾಡು ಗಳಿರುತ್ತವೆಯೇ ಎಂದು ಓದುಗರಾದ  ನೀವು ಕಮೆಂಟ್ ನಲ್ಲಿ ಹೇಳಬೇಕು. 

 ಮರಳಿ ಬೆಂಗಳೂರಿಗೆ ಬಂದು ಊರಿಗೆ ಹೋಗ್ಗಿದಾಯ್ತು ಅಲ್ಲಿ ನನ್ನ ಸಹೋದರ ಅಪ್ಪನಿಗೆಂದು ಹೊಸ ನೀಲಿ ಬಣ್ಣದ ಸ್ಕೂಟರ್ ತಂದಿದ್ದ ಅದಕ್ಕೆ ಕಾರಣಕರ್ತರು ನಮ್ಮಮ್ಮ ಮತ್ತು ನನ್ನ ತಂಗಿ. ಹೀಗೆ ಸಂಕಟದ ಮದ್ಯೆಯೂ ಕೂಡ ಸಂತಸ ಬದುಕ ಬಹುದು ಎಂದು ನನಗೆ ತಿಳಿದ ಸಮಯ ಅದು. 

  ಏನೇ ಕಷ್ಟ-ನಷ್ಟಗಳಿದ್ದರೂ ಅದು ನಮ್ಮ ಭಾವನೆಯಷ್ಟೇ, ಅದನ್ನು ಒಂದು ಮೂಲೆಗೆ ತಳ್ಳಿ ನಾವು ಬದುಕ ಬಹುದು

ನಿರುತ್ತರ

ನಿಮ್ಮಲ್ಲಿ ಭಾವನೆಗಳಿಲ್ಲ ಎಂದು ಅರ್ಥವಲ್ಲ ನನ್ನ ಹಾಗೆ ನಿಮಗೆ  ಭಾವನೆಗಳನ್ನು ವ್ಯಕ್ತಪಡಿಸಲು ಬರುವುದಿಲ್ಲ ಅಷ್ಟೇ.  ನಿಮಗೆ ಸಂತಸವಾಗುವುದಿಲ್ಲ ಎಂದು ಅರ್ಥವಲ್ಲ ನ...